ವಾಸ್ತವ ಸತ್ಯ -ಕೃತಿ ಚೌರ್ಯ
ಕೃತಿ ಚೌರ್ಯ:
ಬರೆಹವನು ಬರೆಯದೆಯೆ,ಪರರ ಬರೆಹವನೋಡಿ ಆಧುನಿಕ ಮಾಧ್ಯಮದಿ ಪಸರಿಸುವರಿಹರು:
ಪರರ ಬರೆಹವತಾವ್ ಪಸರಿಪುದು ತಪ್ಪಲ್ಲ,ಬರೆದಿಹರ ಪೆಸರನ್ನು ಅಳಿಸುವುದು ತರವಲ್ಲ:
ಬರೆಹವನು ಬರೆಯುವರೆ ದೃಢ ಚಿತ್ತವಿರಬೇಕು, ಕೃತಿಚೌರ್ಯ ಮಾಳ್ಪವರ ಏನೆನ್ನಬೇಕು:
ಆದಿಯಿಂದಲೂ ಪರರ ಕೃತಿ ಚೌರ್ಯ ಮಾಡುತ್ತ,ಅನವರತ ಪೆಸರಗಳಿಸುವ ಮಂದಿಯಿಹರು:
ಸ್ವಂತಿಕೆಯು ಇಲ್ಲದಿರೆ ವಂತಿಕೆಯ ಪಡೆಯುತ್ತ,ನಿರಂತರದಿ ಕೃತಿಚೌರ್ಯ ಮಾಡುತ್ತಲಿಹರು:
ಮಂದಮತಿಗಳು ಪರರ ಕೃತಿಚೌರ್ಯಮಾಡುವರು,ಬರೆದವರು ಶ್ರೀ ಹರಿಯ ಸ್ಮರಣೆ ಮಾಡುವರು:
✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,
Post a Comment